ಸತ್ತಾಗ ನಾನು ಜಗಕೆಚ್ಚರವ ಸಾರುವುದು

ಸತ್ತಾಗ ನಾನು ಜಗಕೆಚ್ಚರವ ಸಾರುವುದು
ಗಂಟೆಯ ವಿಷಣ್ಣ ದನಿ : “ಕೀಳುಲೋಕವಿದನ್ನು
ಬಿಟ್ಟು ಓಡಿದ ತುಚ್ಛ ಕ್ರಿಮಿಜೊತೆ ಇರಲು” ಎಂದು;
ದುಃಖಪಡಬೇಕಿಲ್ಲ ನೀನು ಈ ಸಾಲನ್ನು
ನೋಡಿದರು ಸಹ; ಇವನು ಬರೆದಿಟ್ಟ ಕೈಯನ್ನು
ನೆನೆಯಬೇಕಿಲ್ಲ ; ನೆನಪದು ನೋವ ತರುವಲ್ಲಿ
ನಿನ್ನ ಮನಸ್ಸು ನನ್ನ ಎಲ್ಲ ನೆನಪನ್ನೂ
ಮರೆಯಲೆನ್ನುವೆ, ಅಂಥ ಒಲವೆನಗೆ ನಿನ್ನಲ್ಲಿ.
ನಾ ಮಣ್ಣ ಜೊತೆ ಬೆರೆತಮೇಲೆ ನೀನೀ ಕವಿತೆ
ನೋಡದಿದರು ಏನು, ಈ ಬಡಪಾಯಿ ಹೆಸರನ್ನು
ಪಠಿಸುವುದು ಬೇಡ ತುಟಿ ತಿರುತಿರುಗಿ ; ನನ್ನ ಜೊತೆ
ಅಳಿದುಹೋಗಲು ಕಳಿಸಿಬಿಡು ನಿನ್ನ ಒಲವನ್ನು.

ಇಲ್ಲದಿರೆ ನನಗಾಗಿ ನೀ ನೋಯುತಿರುವಾಗ
ಅಣಕವಾಡುವರೆಲ್ಲ ನಾನಿಲ್ಲದಿರುವಾಗ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 71
No longer mourn for me when i am dead

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾವಣಾಂತರಂಗ – ೧
Next post ಹಕ್ಕಿ ಮತ್ತು ಗಿಡುಗ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys